-->
ಬಣ್ಣಗಳಿಂದ ಬದುಕಿನ ಮಾನಸಿಕ ಒತ್ತಡ  ಕಡಿಮೆಯಾಗುತ್ತದೆ - ವಂ| ಫಾ| ಸಿಪ್ರಿಯನ್ ಪಿಂಟೋ ರವರು ಅಭಿಪ್ರಾಯ ವ್ಯಕ್ತಪಡಿಸಿದರು

ಬಣ್ಣಗಳಿಂದ ಬದುಕಿನ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ - ವಂ| ಫಾ| ಸಿಪ್ರಿಯನ್ ಪಿಂಟೋ ರವರು ಅಭಿಪ್ರಾಯ ವ್ಯಕ್ತಪಡಿಸಿದರು




ಬಣ್ಣಗಳಿಂದ ಬದುಕಿನ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. -  ವಂ|ಫಾ| ಸಿಪ್ರಿಯನ್ ಪಿಂಟೋ ಅಭಿಪ್ರಾಯ ವ್ಯಕ್ತಪಡಿಸಿದರು.


ಅವರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೊಡಿಯಾಲ್ ಬೈಲ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಮಂಗಳೂರು ಮತ್ತು ಮಂಗಳೂರು ದಕ್ಷಿಣ ವಲಯ ಚಿತ್ರಕಲಾ ಶಿಕ್ಷಕರ ದ ವತಿಯಿಂದ ಡ್ರಾಯಿಂಗ್ ಗ್ರೇಡ್ ಪರೀಕ್ಷೆ ಯ ಸಿದ್ಧತೆಯ ಸಲುವಾಗಿ ಒಂದು ದಿನದ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ವು  ಪೆರ್ಮನ್ನೂ ರಿನ ಸಂತ ಸೆಬಾಸ್ಟಿಯನ್ ಪ್ರೌಢಶಾಲೆಯಲ್ಲಿ ನಡೆಯಿತು ಇದರ ಉದ್ಧಾಟನಾ ಸಮಾರಂಭದಲ್ಲಿ ಕಾರ್ಯಾಗಾರ ಉದ್ಘಾಟಿಸಿ ಸಂತ ಸೆಬಾಸ್ಟಿಯನ್ ಚಚ್೯ ನ ಧರ್ಮಗಳು ಮಾತಾಡಿದರು


ವೇದಿಕೆಯಲ್ಲಿ ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಆರ್ ಈಶ್ವರ್, ಸಂತ ಸೆಬಾಸ್ಟಿಯನ್ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಸಿರಿಲ್ ವೇಗಸ್,
ಜಿಲ್ಲಾ ಚಿತ್ರ ಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ,  ದಕ್ಷಿಣ ವಲಯದ ಅಧ್ಯಕ್ಷರಾದ ವಿದ್ಯಾ ಲಕ್ಷ್ಮೀ, ಜಿಲ್ಲೆಯ ಉಪಾಧ್ಯಕ್ಷರಾದ ಮಂಜುನಾಥ್ ನಾಯ್ಕ್, ಜಿಲ್ಲಾ ಕಾರ್ಯದರ್ಶಿ ಬಿ.ಎಂ.ರಫೀಕ್ ತುಂಬೆ ಉಪಸ್ಥಿತಿ ಇದ್ದರು

ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದ ವಿ ಕೆ ವಿಟ್ಲ, ನಿವೃತ್ತಿ ಶಿಕ್ಷಕರಾದ ಹರೀಶ್ ಚಂದ್ರ ಅಡ್ಕಾರ್, ಸರಕಾರಿ ನೌಕರ ಚುನಾವಣೆಯಲ್ಲಿ ವಿಜೇತರಾದ ಜಗನ್ನಾಥ್ ಅರಿಯಡ್ಕ ರವರನ್ನು ಸನ್ಮಾನಿಸಲಾಯಿತು.

ಅಸ್ಸೀಸಿ ಸೆಂಟ್ರಲ್ ಸ್ಕೂಲ್ ನ ಚಿತ್ರಕಲಾ ಶಿಕ್ಷಕರಾದ ಸೂರ್ಯಕಾಂತ ಮತ್ತು ವಾಮದಪದವು  ಸರಕಾರಿ ಶಾಲೆಯ ಚಿತ್ರಕಲಾ ಶಿಕ್ಷಕ ಮುರಳೀ ಕೃಷ್ಣ ರಾವ್  ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಸಂಸ್ಥೆಯ ಚಿತ್ರಕಲಾ ಶಿಕ್ಷಕಿ ಲಲಿತಾ ರವರು ಸ್ವಾಗತ ನೀಡಿದರು.
 ಚಿತ್ರಕಲಾ ಶಿಕ್ಷಕರಾದ ರಾಜೇಶ್ ರವರು ಧನ್ಯವಾದವಿತ್ತರು

Ads on article

Advertise in articles 1

advertising articles 2

Advertise under the article