-->
ತ್ರಿಶಾ ಪಿ ಬರೆದ ಕವನ --- ಮಳೆ

ತ್ರಿಶಾ ಪಿ ಬರೆದ ಕವನ --- ಮಳೆ




ಮಳೆ 

ಮಳೆಯ ಮೊದಲ ಹನಿ ನೆಲಕೆ ಬಿದ್ದ ತಕ್ಷಣ
ಮಣ್ಣಿನ ಘಮ ತಣಿಸುವುದು ಜನರ ಮನ 
ಕುಣಿಯುವುದು ನವಿಲು ಗರಿಬಿಡಿಸಿಕೊಂಡು
ಪ್ರಕೃತಿ ನಲಿವುದು ಸಂತಸದಲಿ ಮಿಂದು

ಕೊಂಚ ಮಳೆ ಬಂದರೆ ಸಾಕು 
ಮಕ್ಕಳು ಮಳೆಯಲಿ ನೆನೆಯಲೇಬೇಕು 
ಕಾಗದದ ದೋಣಿಯ ತಯಾರಿಸಬೇಕು 
ನೀರಲಿ ತೇಲುತಲದು ಬಹುದೂರ ಸಾಗಲೇಬೇಕು 

ಮಳೆ ಬಂದರೆ ತುಂಬುವುದು ನೀರಿನ ಮೂಲಗಳು 
ಆ ದಿನಗಳು ರೈತರ ಖುಷಿಯ ಕ್ಷಣಗಳು
ಮಳೆಯ ಸ್ಪರ್ಶದಲ್ಲಿ ಬೆಳೆವವು ಮರ ಗಿಡಗಳು
ಮರ ಗಿಡಗಳಿಂದ ದೊರೆಯುತ್ತದೆ ರಸಭರಿತ  ಹಣ್ಣುಗಳು 

ಮಳೆ ಬಂದರೆ ಸಿಗುವುದು ನೀರು 
ಇದರಿಂದ ಬದುಕುವುದು 
ಜೀವರಾಶಿಗಳು 
ನೀರನ್ನು ರಕ್ಷಿಸುವ ಕರ್ತವ್ಯ ನಮ್ಮದು
ನೀರನ್ನು ಉಳಿಸಿದರೆ ಭೂಮಿ ಹಚ್ಚ ಹಸಿರು

✍️ ತ್ರಿಶಾ ಪಿ
8 ನೇ ತರಗತಿ
ಆಂಗ್ಲ ಮಾಧ್ಯಮ
ಸರಕಾರಿ ಪ್ರೌಢಶಾಲೆ ವಿಟ್ಲ
ಬಂಟ್ವಾಳ, ದಕ್ಷಿಣ ಕನ್ನಡ

Ads on article

Advertise in articles 1

advertising articles 2

Advertise under the article