ಹಸಿರಿನ ಬಯಲಲಿ.....- ಜಯಲಕ್ಷ್ಮಿ ಜಿ ಕುಂಪಲರವರ ಕವನ
Thursday, October 6, 2022
🌹ಹಸಿರಿನ. ಬಯಲಲಿ 🌹
ಹನಿ ಹನಿ ಸುರಿಯುವ ಮೊದಲ ಮಳೆಯಲಿ
ಜೊತೆಯಲಿ ನಡೆದವು ಗದ್ದೆಯ ಬಯಲಲಿ
ಪ್ರಕೃತಿಯ ಸುಂದರ ದೃಶ್ಯವ ಸವಿಯುತಲಿ
ಕುಣಿದೆವು ಚಿಣ್ಣರು ಸೇರುತ ಸಂತಸದಲಿ
ಗದ್ದೆಯ ಬಯಲಲಿ ಗೆಳೆಯರು ಸೇರುತ
ತುಂಬಿಹ ನೀರಲಿ ದೋಣಿಯಾಟ ಆಡುತ
ಮರದ ಸೇತುವೆಯಲಿ ಮೆಲ್ಲನೆ ನಡೆಯುತ
ಸಂತಸ ತುಂಬಿದ ಮನದಲಿ ಹಾಡುತ
ಹಸಿರು ತುಂಬಿದ ಪೈರು ಪಚ್ಚೆಗಳ ನಡುವಲಿ
ಗಾಳಿಯು ತುಂಬಿದ ಬಲೂನನು ಆಕಾಶದಲಿ
ಹಾರಿಸುತ ಏರುತ ಜಿಗಿದವು ಖುಷಿಯಲಿ
ಅಡುತ ನಲಿದಾಡಿದೆವು ಬೆರೆತು ಎಲ್ಲರಲಿ
ಜಯಲಕ್ಷ್ಮಿ ಜಿ ಕುಂಪಲ
ಮಂಗಳೂರು
🌹🌹🌹🌹🌹🌹🌹🌹🌹🌹
@@@@@@@@@@@@@@@@
ಮಕ್ಕಳ ಜೋಳಿಗೆಗೆ ಒಂದು ವರ್ಷ ತುಂಬಿದ ಸಂಭ್ರಮ
ಮಕ್ಕಳ ದಿನದ ಸಂಭ್ರಮಕ್ಕಾಗಿ ಮಕ್ಕಳಿಗಾಗಿ ಮಕ್ಕಳ ಕಲರವ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ
ಸ್ಪರ್ಧೆಯ ವಿವರ
ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಅವರ ಐಚ್ಛಿಕ ವಿಷಯದ ಮೇಲೆ ಚಿತ್ರ ಬಿಡಿಸುವುದು
ಐದನೇ ತರಗತಿಯಿಂದ ಎಂಟನೇ ತರಗತಿಯವರೆಗೆ ನಾನು ಮೆಚ್ಚಿದ ಆಟ ವಿಷಯದಲ್ಲಿ ಚಿತ್ರ ರಚಿಸುವುದು
ಒಂಬತ್ತನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗೆ ನೀರು ಉಳಿಸಿ, ಮರಗಳನ್ನು ಉಳಿಸಿ ವಿಷಯದಲ್ಲಿ ಚಿತ್ರ ರಚಿಸುವುದು
ಪ್ರತೀ ವಿಭಾಗದಲ್ಲೂ ನಗದು, ಪ್ರಶಸ್ತಿ ಪತ್ರ
ಪ್ರಥಮ: 1500 ರೂ ಮತ್ತು ಪ್ರಶಸ್ತಿ ಪತ್ರ
ದ್ವಿತೀಯ : 1000 ರೂ ಮತ್ತು ಪ್ರಶಸ್ತಿ ಪತ್ರ
ತೃತೀಯ : 500 ರೂ ಮತ್ತು ಪ್ರಶಸ್ತಿ ಪತ್ರ
5 ಸಮಾಧಾನಕರ ಬಹುಮಾನ ರೂ 200 ಮತ್ತು ಪ್ರಶಸ್ತಿ ಪತ್ತ
ಭಾಗವಹಿಸಿದ ಎಲ್ಲರಿಗೂ ಇ ಪ್ರಮಾಣಪತ್ರ.
ನೀವು ರಚಿಸಿದ ಚಿತ್ರಗಳನ್ನು ಈ ವಿಳಾಸಕ್ಕೆ ಕಳುಹಿಸಿ ಕೊಡಿ
ಬಿ.ಎಂ.ರಫೀಕ್ ತುಂಬೆ
ಚಿತ್ರಕಲಾ ಶಿಕ್ಷಕರು
ಅನುದಾನಿತ ಟಿಪ್ಪು ಸುಲ್ತಾನ್ ಪ್ರೌಡ ಶಾಲೆ, ಕೋಟೆಪುರ- ಉಳ್ಳಾಲ 575020
ದಕ್ಷಿಣ ಕನ್ನಡ
ಅಕ್ಟೋಬರ್ 30 ರ ಒಳಗಾಗಿ ಚಿತ್ರಗಳನ್ನು ಕಳುಹಿಸಿ ಕೊಡಿ
ಫಲಿತಾಂಶ ವನ್ನು ನವೆಂಬರ್ 13 ರಂದು ಜೋಳಿಗೆಯ ವೆಬ್ಸೈಟಲ್ಲಿ ಪ್ರಕಟಿಸಲಾಗುವುದು.
ಎಳೆಯ ಬೆಳೆಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಮ್ಮೀ ಕಾರ್ಯಕ್ರಮ ವನ್ನು ಪ್ರೋತ್ಸಾಹಿಸಿ