-->
ತ್ರಿಲೋಕ ರಕ್ಷಕ - ಭಾಗ್ಯಶ್ರೀ ಕಂಬಳಕಟ್ಟ ರವರ ಕವನ

ತ್ರಿಲೋಕ ರಕ್ಷಕ - ಭಾಗ್ಯಶ್ರೀ ಕಂಬಳಕಟ್ಟ ರವರ ಕವನ




*ತ್ರಿಲೋಕ ರಕ್ಷಕ* 

ಜಗದೀಶ್ವರ ಜಗಕಾಯ್ವ ಮೃತ್ಯುಂಜಯನೆ
ಗಂಗಾಧರ ಸುರಸುಂದರ ವಾಮದೇವನೆ |
ನಾಗಭೂಷಣ ವಿಷ ಉಂಡ ವಿಷಕಂಠನೆ
ಬಾಗುತಲಿ ದೇವನಿಗೆ ಸಲ್ಲಿಸುವೆ ವಂದನೆ ||

ದೇವತೆಗಳ ದೇವ ಮಹಾದೇವ ಶಂಕರ
ಅವನಿಯ ಕಾಪಾಡು ಅರ್ಧನಾರೀಶ್ವರ    |
ನವಚೈತನ್ಯವ ನೀಡು ಹೇ ಪರಮೇಶ್ವರ
ಭವಭಯಹರನೊಲಿದರೆ ದುರಿತದೂರ   ||

ಕೈಲಾಸವಾಸಗೆ ಕರಮುಗಿದು ನಮಿಸುವೆ
ಹಾಲಾಹಲ ಕುಡಿದ ಹರನ ಪ್ರಾರ್ಥಿಸುವೆ  |
ತ್ರಿಲೋಕ ರಕ್ಷಕನೇ ಹರಸೆಂದು ಬೇಡುವೆ
ನೀಲಕಂಠ ಸ್ತುತಿಯ ಅನುದಿನ ಪಾಡುವೆ ||

✍️ *ಭಾಗ್ಯಶ್ರೀ ಕಂಬಳಕಟ್ಟ, ಉಡುಪಿ.*


Ads on article

Advertise in articles 1

advertising articles 2

Advertise under the article